ರಕ್ಷಕ ಶಿಕ್ಷಕ
ಸಂಘದ ಮಹಾಸಭೆ
ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆಯ 2015-2016 ಸಾಲಿನ ಶೈಕ್ಷಣಿಕ ವರ್ಷದ ರಕ್ಷಕ ಶಿಕ್ಷಕ
ಸಂಘದ ಮಹಾಸಭೆಯು ದಿನಾಂಕ 03/07/2015 ಶುಕ್ರವಾರದಂದು ನಡೆಯಿತು. ಮಕ್ಕಳ ರಕ್ಷಕರು
ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ವರ್ಷವೂ ರಕ್ಷಕ ಶಿಕ್ಷಕ ಸಂಘದ
ಅಧ್ಯಕ್ಷರಾಗಿ ಶ್ರೀಯುತ ಗಣೇಶ ಪಾರೆಕಟ್ಟ ಅವರನ್ನು, ಉಪಾಧ್ಯಕ್ಷರಾಗಿ ಶ್ರೀಯುತ
ಶಿವಪ್ರಸಾದ್ ಅವರನ್ನೂ ಆರಿಸಲಾಯಿತು.ಮಾತೃ ಸಂಘದ ಅಧ್ಯಕ್ಷೆಯಾಗಿ ಶ್ರೀಮತಿ ಯಶೋದಾ ಮತ್ತು ಉಪಾಧ್ಯಕ್ಷೆಯಾಗಿ ಶ್ರೀಮತಿ ಸವಿತಾ ಅವರನ್ನೂ ಆರಿಸಲಾಯಿತು. ಶಾಲಾ ವ್ಯವಸ್ಥಾಪಕರಾದ ಶ್ರೀಯುತ ಗೋಪಾಲಕೃಷ್ಣ ಶ್ಯಾನುಭೋಗ್, ಶಾಲಾ ಮುಖ್ಯೋಪಾದ್ಯಾಯಿನಿ ಶ್ರೀಮತಿ ಮೋಹಿನಿ ರಾವ್ ಉಪಸ್ಥಿತರಿದ್ದು,"ಶಾಲೆಯ ಅಭಿವೃದ್ಧಿಯಲ್ಲಿ ಕೇವಲ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮಾತ್ರವಲ್ಲದೆ ಜೊತೆಯಲ್ಲಿ ಹೆತ್ತವರ ಹಾಗೂ ಸಮಾಜದ ಪಾಲು ಹೆಚ್ಚಿದೆ.ಆದ್ದರಿಂದ ಎಲ್ಲರೂ ಒಗ್ಗಟ್ಟಿನಿಂದ ಶಾಲೆಯ ಮತ್ತು ಮಕ್ಕಳ ಅಭಿವೃದ್ಧಿಗೆ ಪ್ರಯತ್ನಿಸಬೇಕು"ಎಂದರು.ಶಾಲೆಯ ಎಲ್ಲಾ ಅಧ್ಯಾಪಕರೂ, ನೌಕರ ವೃಂದದವರೂ ಸಭೆಯಲ್ಲಿ ಹಾಜರಿದ್ದರು.
No comments:
Post a Comment