ಕಾಸರಗೋಡು ಉಪಜಿಲ್ಲಾ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಮಾಹಿತಿ , ಮಾಹಿತಿ
ತಂತ್ರಜ್ಞಾನ,ಮತ್ತು ಕರಕುಶಲ ಮೇಳ
ಕಾಸರಗೋಡು ಉಪಜಿಲ್ಲಾ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ, ಮಾಹಿತಿ , ಮಾಹಿತಿ
ತಂತ್ರಜ್ಞಾನ,ಮತ್ತು ಕರಕುಶಲ ಮೇಳವು ನವೆಂಬರ್ 11 ರಂದು ಕೂಡ್ಲು ಶ್ರೀ ಗೋಪಾಲಕೃಷ್ಣ
ಪ್ರೌಢಶಾಲೆಯಲ್ಲಿ ಜರಗಲಿರುವುದು.ನವೆಂಬರ್ 10ರಂದು ಬೆಳಗ್ಗೆ ಶಾಲಾ ಪ್ರಬಂಧಕ ಶ್ರೀ
ಕೆ.ಜಿ ಶ್ಯಾನುಭೋಗ್ ಧ್ವಜಾರೋಹಣ ಮಾಡುವರು. 10.00 ಗಂಟೆಗೆ ಕಾಸರಗೋಡು ಶಾಸಕ ಎನ್.ಎ.
ನೆಲ್ಲಿಕುನ್ನು ಮೇಳವನ್ನು ಉದ್ಘಾಟಿಸುವರು.ಮಧೂರು ಗ್ರಾಮ ಪಂಚಾಯತು ಅಧ್ಯಕ್ಷ ಮಾಧವ
ಮಾಸ್ತರ್ ಅಧ್ಯಕ್ಷತೆ ವಹಿಸುವರು.ಕಾಸರಗೋಡು ಸಿ.ಪಿ.ಸಿ.ಆರ್.ಐ ನಿರ್ದೇಶಕ ಡಾ. ಚೌಡಪ್ಪ
ಮುಖ್ಯ ಅತಿಥಿಯಾಗಿರುವರು. ಕಾಸರಗೋಡು ಉಪಜಿಲ್ಲಾ ವಿದ್ಯಾಧಿಕಾರಿ ಪಿ.ರವೀಂದ್ರನಾಥ್ ,
ಮಧೂರು ಗ್ರಾಮ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರಾದ ಗೋಪಾಲಕೃಷ್ಣ, ಮಾಲತಿ, ವಾರ್ಡ್
ಸದಸ್ಯೆ ಪುಷ್ಪ, ಬ್ಲೋಕ್ ಪಂಚಾಯತ್ ಸದಸ್ಯ ಎಸ್. ಕುಮಾರ್ , ಕಾಸರಗೋಡು ಡಿ.ಡಿ.ಇ ಸಿ.
ರಾಘವನ್, ಶಾಲಾ ಮ್ಯಾನೇಜರ್ ಕೆ.ಜಿ ಶ್ಯಾನುಭೋಗ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ
ಪ್ರೋಜೆಕ್ಟ್ ಆಫೀಸರ್ ಸಂಧ್ಯಾ ವಿ ಶೆಟ್ಟಿ,, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ
ಪಾರೆಕಟ್ಟ, ಶಾಲಾ ಮುಖ್ಯೋಪಾಧ್ಯಾಯಿನಿ ಮೋಹಿನಿ ರಾವ್ ಕೆ ಉಪಸ್ಥಿತರಿರುವರು.
ಸಂಜೆ ನಾಲ್ಕು ಗಂಟೆಗೆ ಜಿಲ್ಲಾ ವಿದ್ಯಾಧಿಕಾರಿ ಎನ್ ಸದಾಶಿವ ನಾಯಕ್ ಅವರ
ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಧೂರು ಗ್ರಾಮ ಪಂಚಾಯತು ಸ್ಥಾಯಿ ಸಮಿತಿ
ಅಧ್ಯಕ್ಷ ರವೀಂದ್ರ ರೈ ವಿಜೇತರಿಗೆ ಬಹುಮಾನ ವಿತರಣೆ ಮಾಡುವರು.ಡಯೆಟ್ ಮಾಯಿಪ್ಪಾಡಿ
ಪ್ರಾಂಶುಪಾಲ ಕೃಷ್ಣಕುಮಾರ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಗಣೇಶ ಪಾರೆಕಟ್ಟ , ಮಾತೃ
ಸಂಘದ ಅಧ್ಯಕ್ಷೆ ಯಶೋಧ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಠಲ ಶುಭ ಹಾರೈಸುವರು.
ನವೆಂಬರ್ 11 ರಂದು ಸಂಜೆ 3.30 ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಉದುಮ ಶಾಸಕ
ಕುಂಞಿರಾಮನ್ ಉದ್ಘಾಟಿಸುವರು.ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀ ಪಿ.ಪಿ ಶ್ಯಾಮಲಾದೇವಿ
ಅಧ್ಯಕ್ಷತೆ ವಹಿಸುವರು. ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಮುಮ್ತಾಜ್ ಶುಕೂರ್
ಮುಖ್ಯ ಅತಿಥಿಯಾಗಿರುವರು.ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಪ್ರದೀಪ್ ಬಹುಮಾನ
ವಿತರಿಸುವರು. ಮಧೂರು ಗ್ರಾಮ ಪಂಚಾಯತು ಉಪಾಧ್ಯಕ್ಷೆ ಸುಜ್ಞಾನಿ ಶ್ಯಾನುಭೋಗ್ , ಬ್ಲೋಕ್
ಪಂಚಾಯತ್ ಸದಸ್ಯೆ ಪುಷ್ಪಲತಾ ಆಳ್ವ, ತಹಶಿಲ್ದಾರ್ ಶಶಿಧರ ಶೆಟ್ಟಿ, , ಬಿ. ಆರ್. ಸಿ ಯ
ಜೋಜಿ, ಮಧೂರು ಶಾಲಾ ಮುಖ್ಯೋಪಾಧ್ಯಾಯ ಸೀತಾರಾಮ ಮಾಸ್ತರ್ ಶುಭ ಹಾರೈಸುವರು. ಕಾಸರಗೋಡು
ಉಪಜಿಲ್ಲೆಯ 117 ಶಾಲೆಗಳ ಸುಮಾರು 2500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಮೇಳಗಳಲ್ಲಿ
ತಮ್ಮ ಪ್ರತಿಭೆಗಳನ್ನು ಹೊರಹೊಮ್ಮಿಸಲಿದ್ದಾರೆ...
No comments:
Post a Comment